Slide
Slide
Slide
previous arrow
next arrow

ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

300x250 AD

ಜೋಯಿಡಾ : ತಾಲೂಕಿನ ಗಣೇಶಗುಡಿಯಲ್ಲಿ ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ಭಗವತಿರಾಜ್ ಹಾಗೂ ಬೆಂಗಳೂರುನ ನಿಕಾಯ್ ಕಂಪನಿ ಮಾಲಿಕ ರವಿ ಪಿ.ವಿ.ರವರ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವೇಡಾ ಗ್ರಾ.ಪಂ‌ ಅಧ್ಯಕ್ಷ ಅರುಣ್ ಭಗವತಿರಾಜ್ ಬಡ ಶಾಲಾ ಮಕ್ಕಳಿಗೆ ಶಿಕ್ಷಣ ಕಲಿಯಲು ಹೆಚ್ಚಿನ ಆಸಕ್ತಿ ಇದ್ದರೂ ವೈಯಕ್ತಿಕ ಕಾರಣಗಳಿಂದ ಶಿಕ್ಷಣ ವಂಚಿತರಾಗುತ್ತಾರೆ. ಅಂತಹ ಮಕ್ಕಳಿಗೆ ನಾವು ಎಂದಿಗೂ ಸಹಾಯ ಮಾಡುತ್ತೇವೆ. ಇಂದಿನ ಬಡ ಮಕ್ಕಳೇ ನಾಳೆ ಕಲಿತು ಉತ್ತಮ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಶ್ರಮಿಸಿದರೇ ಅದೂ ನಮಗೆ ಬಹಳಷ್ಟು ಸಂತೋಷ ಕೊಡುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಬಹಳ ಮುಖ್ಯ. ಹೀಗಾಗಿ ಎಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಶ್ರಮಿಸಬೇಕು ಎನ್ನುತ್ತಾ , ನಮ್ಮೂರಿನ ಶಾಲೆಯಲ್ಲಿ ಕಲಿತು ಇಂದು ಉತ್ತಮ ಹುದ್ದೆಯಲ್ಲಿರುವ ಸ್ನೇಹಿತ ರವಿ ಅವರಿಗೆ ಉಚಿತ ಸ್ಕೂಲ್ ಬ್ಯಾಗ್ ನೀಡಿದ್ದಕ್ಕೆ ಅಭಿನಂದಿಸಿದರು‌‌.

ಈ ಸಂದರ್ಭದಲ್ಲಿ ಅವೇಡಾ ಗ್ರಾ.ಪಂ ಸದಸ್ಯರು ಮತ್ತು ಗಣೇಶಗುಡಿ ಭಾಗದ ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top